ನವಂಬರ್ ತಿಂಗಳು ಪೂರ
ಎಲ್ಲೆಲ್ಲು ಕನ್ನಡದ ಹರಕೆ
ಉಳಿದ ತಿಂಗಳು ಬರಿ
ಗೊರಕೆ ...ಗೊರಕೆ...
Tuesday, November 4, 2008
Tuesday, October 28, 2008
ಪೂರ್ಣ - ಬಿಂದು
ಅಂದು ನಾ ಹೂವು ಕೊಟ್ಟು
I Love U ಅಂದದಕ್ಕೆ
OK ಅಂದಳು ನನ್ನ ಬಿಂದು
ಇಂದು ಕೈಯಲ್ಲಿ ಕಾಸಿಲ್ಲದ್ದಕ್ಕೆ
ನನ್ನ ಪ್ರೀತಿಗೆ ಟಾಟಾ ಎಂದಳು
ಉಳಿದದ್ದು ಕೊನೆಯಲ್ಲಿ ಒಂದು ಪೂರ್ಣ - ಬಿಂದು
I Love U ಅಂದದಕ್ಕೆ
OK ಅಂದಳು ನನ್ನ ಬಿಂದು
ಇಂದು ಕೈಯಲ್ಲಿ ಕಾಸಿಲ್ಲದ್ದಕ್ಕೆ
ನನ್ನ ಪ್ರೀತಿಗೆ ಟಾಟಾ ಎಂದಳು
ಉಳಿದದ್ದು ಕೊನೆಯಲ್ಲಿ ಒಂದು ಪೂರ್ಣ - ಬಿಂದು
Saturday, June 7, 2008
ಮಾತಿಗಿಂತ ಕೃತಿ ದೊಡ್ಡದು - ವಿಶ್ವ ಪರಿಸರ ದಿನಾಚರಣೆ ೨೦೦೮
ಕೇವಲ ಪತ್ರಿಕೆಗಲ್ಲಿ, ಟೀ.ವಿ ಮಾಧ್ಯಮಗಳಲ್ಲಿ ಜಾಹಿರಾತು ಕೊಟ್ಟು ನಾಲ್ಕು ಮಾತನಾಡಿದ ಮಟ್ಟಿಗೆ ಎಲ್ಲವೂ ಸಾದಿಸಿದಂತೆ ಎಂದು ತಿಳಿದರೆ ತಪ್ಪಾಗುತ್ತದೆ.
ನಮ್ಮ ಐಗನ್ ಕಂಪನಿಯಲ್ಲಿ ಇದಲ್ಲದಕ್ಕಿಂಥ ಬಿನ್ನವಾಗಿ ಆಚರಿಸಲಾಯಿತು. ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆ ೨೦೦೮ ಆಚರಿಸುವ
ಮೂಲಕ ನಾವು ಎಲ್ಲರಿಗಿಂತ ಭಿನ್ನ ಎಂಬುದನ್ನು ತೋರಿಸಿದೆವು.
ಈ ಸಂಧರ್ಭದಲ್ಲಿ ಮಾನವ ಸಂಪನ್ಮೂಲ ಅಧಿಕಾರಿಗಳಾದ ಶ್ರೀ. ಚಿದಾನಂದ ಎಲ್. ಆರ್ ಅವರು ಆ ದಿನದ ವಿಶೇಷತೆಯ ಬಗ್ಗೆ ಮಾತನಾಡಿದರು ಹಾಗು ಗಿಡಗಳನ್ನು ನೆಡಲಾಯಿತು.
ಕೃಪೆ:
ಐಗನ್ ,
ಕೆ ಡಿ ಡಿ ಎಲ್ ಲಿಮಿಟೆಡ್,
ಬೆಂಗಳೂರು
Saturday, May 17, 2008
ಕಗ್ಗತ್ತಲೆಯ ಗೂಡಿನವರು ನಾವು!!
ಕಗ್ಗತ್ತಲೆಯ ಗೂಡಿನವರು ನಾವು,
ಸೂರ್ಯನಿದ್ದರು ಬೆಳಕ ಕಾಣದೆ,
ಕತ್ತಲೆಯ ಹಾದಿ ಇಡಿದವರು ನಾವು
ಕಗ್ಗತ್ತಲೆಯ ಗೂಡಿನವರು ನಾವು!!
ಇರುವ ಆರಡಿ ಮೂರಡಿ ಜಾಗದಲ್ಲೇ,
ಬಂಗಲೆಯ ಸವಿಗನಸ ಕಂಡು,
ನೋವಿನ ಛಾವಣಿ ಒದ್ದವರು ನಾವು,
ಕಗ್ಗತ್ತಲೆಯ ಗೂಡಿನವರು ನಾವು!!
ಅಶನ - ವ್ಯಶನ ಯಾವುದೇ ಇರಲಿ,
ಮದುವೆ - ಮುಂಜಿ ಏನೆ ಬರಲಿ,
ಇದ್ದಲ್ಲೆ ಮಮತೆಯ ನೂವುಂಡವರು ನಾವು,
ಕಗ್ಗತ್ತಲೆಯ ಗೂಡಿನವರು ನಾವು!!
ರೊಚ್ಚು ಕೆಸರೆ ಹರಿಯುತಿರಲಿ,
ಕೊಳೆತ ಮಾಂಸವೇ ನಾರುತಿರಲಿ,
ಇದ್ದಲ್ಲೆ ಮೃಷ್ಟಾನ್ನವ ಸವಿದವರು ನಾವು,
ಕಗ್ಗತ್ತಲೆಯ ಗೂಡಿನವರು ನಾವು!!
ಹೊಟ್ಟೆ ಬಟ್ಟೆಗೆ ಹಸಿವ ಕಟ್ಟಿ,
ಬಾಳ ಬಂಡಿಗೆ ಒಲವ ನೊಗವ ಕಟ್ಟಿ,
ಬಡತನದ ಹಾದಿಯಲ್ಲಿ ಸಾಗಿದವರು ನಾವು,
ಕಗ್ಗತ್ತಲೆಯ ಗೂಡಿನವರು ನಾವು!!
(ನಾನು ಜುಲೈ ೨೦೦೨ ರಲ್ಲಿ ಎಂ. ಎಸ್. ಡಬ್ಲ್ಯು ಮಾಡುವಾಗ
ಶೈಕ್ಷಣಿಕ ಅದ್ಯಯನಕ್ಕಾಗಿ ಬೆಂಗಳೂರಿನ ಒಂದು ಕೊಳಗೆರಿಗೆ ಬೇಟಿ
ಇಟ್ಟಾಗ ನನ್ನ ಕಣ್ಮುಂದೆ ಬಂದ ಒಂದು ರೋಮಾಂಚಕಾರಿ ಅನುಭೂತಿ)
ಸೂರ್ಯನಿದ್ದರು ಬೆಳಕ ಕಾಣದೆ,
ಕತ್ತಲೆಯ ಹಾದಿ ಇಡಿದವರು ನಾವು
ಕಗ್ಗತ್ತಲೆಯ ಗೂಡಿನವರು ನಾವು!!
ಇರುವ ಆರಡಿ ಮೂರಡಿ ಜಾಗದಲ್ಲೇ,
ಬಂಗಲೆಯ ಸವಿಗನಸ ಕಂಡು,
ನೋವಿನ ಛಾವಣಿ ಒದ್ದವರು ನಾವು,
ಕಗ್ಗತ್ತಲೆಯ ಗೂಡಿನವರು ನಾವು!!
ಅಶನ - ವ್ಯಶನ ಯಾವುದೇ ಇರಲಿ,
ಮದುವೆ - ಮುಂಜಿ ಏನೆ ಬರಲಿ,
ಇದ್ದಲ್ಲೆ ಮಮತೆಯ ನೂವುಂಡವರು ನಾವು,
ಕಗ್ಗತ್ತಲೆಯ ಗೂಡಿನವರು ನಾವು!!
ರೊಚ್ಚು ಕೆಸರೆ ಹರಿಯುತಿರಲಿ,
ಕೊಳೆತ ಮಾಂಸವೇ ನಾರುತಿರಲಿ,
ಇದ್ದಲ್ಲೆ ಮೃಷ್ಟಾನ್ನವ ಸವಿದವರು ನಾವು,
ಕಗ್ಗತ್ತಲೆಯ ಗೂಡಿನವರು ನಾವು!!
ಹೊಟ್ಟೆ ಬಟ್ಟೆಗೆ ಹಸಿವ ಕಟ್ಟಿ,
ಬಾಳ ಬಂಡಿಗೆ ಒಲವ ನೊಗವ ಕಟ್ಟಿ,
ಬಡತನದ ಹಾದಿಯಲ್ಲಿ ಸಾಗಿದವರು ನಾವು,
ಕಗ್ಗತ್ತಲೆಯ ಗೂಡಿನವರು ನಾವು!!
(ನಾನು ಜುಲೈ ೨೦೦೨ ರಲ್ಲಿ ಎಂ. ಎಸ್. ಡಬ್ಲ್ಯು ಮಾಡುವಾಗ
ಶೈಕ್ಷಣಿಕ ಅದ್ಯಯನಕ್ಕಾಗಿ ಬೆಂಗಳೂರಿನ ಒಂದು ಕೊಳಗೆರಿಗೆ ಬೇಟಿ
ಇಟ್ಟಾಗ ನನ್ನ ಕಣ್ಮುಂದೆ ಬಂದ ಒಂದು ರೋಮಾಂಚಕಾರಿ ಅನುಭೂತಿ)
ಪ್ರೀತಿಯ ಋಜು
ಕರಿ ಮೋಡ ಕರಗಿ ನೀರಾಗಿ ಭುವಿಗೆ ತಂಪನೆರವಾಗ,
ಎನ್ನೆದೆಯ ಪ್ರೀತಿ ಗರಿಗೆದರಿ ಕಾಡಿತ್ತು ನಿನ್ನ ಮೋಡಿ !!
ಹುಚ್ಚು ಮನಸಿನ ಚಿಪ್ಪಿನೊಳಗೆ ಬಚ್ಚಿಟ್ಟು ನನ್ನೋಲವು,
ಕಾಡಿತ್ತು ಕಣ್ಣಾಲೆಯ ಅಂಚಿನಲ್ಲಿ ಕಣ್ಣೀರ ಹನಿಯಾಗಿ!!
ಹೃದಯಾಳದ ಗರ್ಭದೊಳಗೆ ವಿರಹದ ನಾಡಿಮೀಟಿ,
ಕಾಡುತ್ತಿತ್ತು ಒಲುಮೆಯಲ್ಲಿ ನೀನೋತ್ತಿದ ಪ್ರೀತಿಯ ಋಜು!!
ಎನ್ನೆದೆಯ ಪ್ರೀತಿ ಗರಿಗೆದರಿ ಕಾಡಿತ್ತು ನಿನ್ನ ಮೋಡಿ !!
ಹುಚ್ಚು ಮನಸಿನ ಚಿಪ್ಪಿನೊಳಗೆ ಬಚ್ಚಿಟ್ಟು ನನ್ನೋಲವು,
ಕಾಡಿತ್ತು ಕಣ್ಣಾಲೆಯ ಅಂಚಿನಲ್ಲಿ ಕಣ್ಣೀರ ಹನಿಯಾಗಿ!!
ಹೃದಯಾಳದ ಗರ್ಭದೊಳಗೆ ವಿರಹದ ನಾಡಿಮೀಟಿ,
ಕಾಡುತ್ತಿತ್ತು ಒಲುಮೆಯಲ್ಲಿ ನೀನೋತ್ತಿದ ಪ್ರೀತಿಯ ಋಜು!!
Wednesday, March 5, 2008
ಮುಂಜಾನೆ - ಸಂಜೆ
ಮುಂಜಾನೆ ಎದ್ದು ಖಾವಿ ತೊಟ್ಟು
ಕುಣಿದು ಹಾಡಿದ ಮೀರಾ - ಭಜನ್
ಸಂಜೆ ಖಾವಿ ಬಿಚ್ಚಿ ಎಲ್ಲ ಬಿಟ್ಟು
ತಿಂದು ತೇಗಿದ ತಂದುರಿ ಚಿಕನ್
ಕುಣಿದು ಹಾಡಿದ ಮೀರಾ - ಭಜನ್
ಸಂಜೆ ಖಾವಿ ಬಿಚ್ಚಿ ಎಲ್ಲ ಬಿಟ್ಟು
ತಿಂದು ತೇಗಿದ ತಂದುರಿ ಚಿಕನ್
Monday, February 25, 2008
Sunday, February 24, 2008
Saturday, February 23, 2008
ಹನುಮಾಯಣ
ಹನುಮ ಲಂಕೆಗೆ ಬೆಂಕಿ ಇಟ್ಟ
ಆದರೆ ರಾವಣನನ್ನು ಮಾತ್ರ ಬಿಟ್ಟ,
ಹನುಮನಿಂದ ಕೊಲ್ಲಲ್ಪಟ್ಟದ್ದರೆ ರಾವಣ,
ರಾಮಯಣವಾಗುತ್ತಿತ್ತು ಹನುಮಾಯಣ
Subscribe to:
Posts (Atom)